Sunday, June 1, 2025
HomeInternationalBangladesh: ಭಾರತ-ಪಾಕಿಸ್ತಾನ ಉದ್ವಿಗ್ನತೆಯಲ್ಲಿ ಬಾಂಗ್ಲಾದೇಶದ ವಿವಾದಾತ್ಮಕ ಹೇಳಿಕೆ: ಈಶಾನ್ಯ ಭಾರತದ ಮೇಲೇ ಕಣ್ಣಾಕಿದೆಯಾ ಬಾಂಗ್ಲಾ?

Bangladesh: ಭಾರತ-ಪಾಕಿಸ್ತಾನ ಉದ್ವಿಗ್ನತೆಯಲ್ಲಿ ಬಾಂಗ್ಲಾದೇಶದ ವಿವಾದಾತ್ಮಕ ಹೇಳಿಕೆ: ಈಶಾನ್ಯ ಭಾರತದ ಮೇಲೇ ಕಣ್ಣಾಕಿದೆಯಾ ಬಾಂಗ್ಲಾ?

Bangladesh – ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಿಂದ ಭಾರತ-ಪಾಕಿಸ್ತಾನ ಸಂಬಂಧಗಳಲ್ಲಿ ಉದ್ವಿಗ್ನತೆ ಗಗನಕ್ಕೇರಿದೆ. ಈ ದಾಳಿಯಲ್ಲಿ 26 ಜನರು, ಅವರಲ್ಲಿ ಹೆಚ್ಚಿನವರು ಹಿಂದೂ ಪ್ರವಾಸಿಗರು, ಜೀವ ಕಳೆದುಕೊಂಡಿದ್ದಾರೆ. ಈ ಘಟನೆಯಿಂದ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಒತ್ತಡ ಹೆಚ್ಚಾಗಿದ್ದು, ಈ ಪರಿಸ್ಥಿತಿಯ ಲಾಭ ಪಡೆಯಲು ಬಾಂಗ್ಲಾದೇಶವು ಸಂಚು ರೂಪಿಸುತ್ತಿದೆಯೇ? ಬಾಂಗ್ಲಾದೇಶವು ಭಾರತದ ಈಶಾನ್ಯ ರಾಜ್ಯಗಳನ್ನು ವಶಪಡಿಸಿಕೊಳ್ಳಲು ಹೊಂಚು ಹಾಕುತ್ತಿದೆಯೇ ಎಂಬ ಅನುಮಾನಗಳು ಉದ್ಬವಿಸಿದೆ. ಇದಕ್ಕೆ ಕಾರಣ ತಿಳಿಯಲು ಮುಂದೆ ಓದಿ

Bangladesh – ಉದ್ವಿಗ್ನತೆಯ ನಡುವೆ ಬಾಂಗ್ಲಾದೇಶದ ವಿವಾದಾತ್ಮಕ ಹೇಳಿಕೆ

ಒಂದು ಕಡೆ ಭಾರತವು ಯಾವುದೇ ಕ್ಷಣದಲ್ಲಿ ತನ್ನ ಮೇಲೆ ದಾಳಿ ಮಾಡಬಹುದು ಎಂದು ಪಾಕಿಸ್ತಾನ ಆತಂಕಗೊಂಡಿದೆ. ಇನ್ನೊಂದೆಡೆ, ಬಾಂಗ್ಲಾದೇಶದ (Bangladesh) ಮಧ್ಯಂತರ ಸರ್ಕಾರದ ಅಧಿಕಾರಿಯೊಬ್ಬರು ಮತ್ತು ನಿವೃತ್ತ ಮೇಜರ್ ಜನರಲ್ ನೀಡಿರುವ ವಿವಾದಾತ್ಮಕ ಹೇಳಿಕೆಗಳು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿವೆ.

bangladesh - India-Pakistan tensions rise after Pahalgam terror attack, Bangladesh's controversial statement draws global attention

ನಿವೃತ್ತ ಬಾಂಗ್ಲಾದೇಶದ (Bangladesh) ಮೇಜರ್ ಜನರಲ್ ಎಎಲ್ಎಂ ಫಜ್ಲುರ್ ರೆಹಮಾನ್ ಅವರು ಪಾಕಿಸ್ತಾನದ ಮೇಲೆ ಭಾರತ ದಾಳಿ ಮಾಡಿದರೆ, ಬಾಂಗ್ಲಾದೇಶವು ಭಾರತದ ಏಳು ಈಶಾನ್ಯ ರಾಜ್ಯಗಳನ್ನು ಆಕ್ರಮಿಸಿಕೊಳ್ಳಬೇಕು ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯು ಭಾರತದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ, ನವದೆಹಲಿಯೊಂದಿಗೆ ಢಾಕಾದ ಸಂಬಂಧ ಹದಗೆಟ್ಟಿತ್ತು. ಈ ಬೆಳವಣಿಗೆಗಳು ಉಭಯ ದೇಶಗಳ ನಡುವಿನ ಭವಿಷ್ಯದ ಸಹಕಾರದ ಬಗ್ಗೆ ಕಳವಳ ಮೂಡಿಸಿವೆ.

ಪಹಲ್ಗಾಮ್ ದಾಳಿ ಮತ್ತು ಜಾಗತಿಕ ಪ್ರತಿಕ್ರಿಯೆ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ವಿಶ್ವದ ಅನೇಕ ದೇಶಗಳು ಖಂಡಿಸಿವೆ. ಹಲವಾರು ರಾಷ್ಟ್ರಗಳ ಮುಖ್ಯಸ್ಥರು ಪ್ರಧಾನಿ ಮೋದಿಯವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಂತಾಪ ಸೂಚಿಸಿದ್ದಾರೆ ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ದಾಳಿಯಲ್ಲಿ 26 ಅಮಾಯಕ ಜನರು ಬಲಿಯಾಗಿದ್ದು, ಅವರಲ್ಲಿ ಹೆಚ್ಚಿನವರು ಹಿಂದೂ ಯಾತ್ರಿಕರಾಗಿದ್ದರು.

ಭಾರತವು ಈ ದಾಳಿಗೆ ಪಾಕಿಸ್ತಾನವನ್ನು ನೇರವಾಗಿ ಹೊಣೆಗಾರನನ್ನಾಗಿ ಮಾಡಿದೆ, ಆದರೆ ಪಾಕಿಸ್ತಾನವು ಈ ಆರೋಪವನ್ನು ನಿರಾಕರಿಸಿದೆ. ಈ ಘಟನೆಯು ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಭೀತಿಯನ್ನು ಹೆಚ್ಚಿಸಿದ್ದು ಮಾತ್ರವಲ್ಲದೆ, ಪ್ರಾದೇಶಿಕ ಮತ್ತು ಜಾಗತಿಕ ಶಕ್ತಿಗಳ ನಿಲುವನ್ನು ಬಹಿರಂಗಪಡಿಸಿದೆ. Read this also : ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ದಿಢೀರ್ ನಾಪತ್ತೆ? ಕುಟುಂಬ ಸಮೇತ ವಿದೇಶಕ್ಕೆ ತೆರಳಿರುವ ಶಂಕೆ….!

ಭಾರತಕ್ಕೆ ನೆರೆಯ ರಾಷ್ಟ್ರಗಳ ಬೆಂಬಲ

ಪಹಲ್ಗಾಮ್ ದಾಳಿಯ ನಂತರ, ಭಾರತವು ತನ್ನ ಕೆಲವು ನೆರೆಯ ರಾಷ್ಟ್ರಗಳಿಂದ ಬೆಂಬಲವನ್ನು ಪಡೆದುಕೊಂಡಿದೆ. ಭೂತಾನ್ ಮತ್ತು ಬಾಂಗ್ಲಾದೇಶಗಳು ಸಹ ಈ ದಾಳಿಯನ್ನು ತೀವ್ರವಾಗಿ ಖಂಡಿಸಿವೆ ಮತ್ತು ಭಯೋತ್ಪಾದನೆಯ ವಿರುದ್ಧ ಭಾರತದ ನಿಲುವನ್ನು ಬೆಂಬಲಿಸಿವೆ. ಆದರೆ, ಬಾಂಗ್ಲಾದೇಶದ ನಿವೃತ್ತ ಮೇಜರ್ ಜನರಲ್ ಅವರ ವಿವಾದಾತ್ಮಕ ಹೇಳಿಕೆಯು ಈ ಬೆಂಬಲದ ನಡುವೆಯೂ ಅನುಮಾನಗಳನ್ನು ಹುಟ್ಟುಹಾಕಿದೆ.

bangladesh - India-Pakistan tensions rise after Pahalgam terror attack, Bangladesh's controversial statement draws global attention

Bangladesh – ಫಜ್ಲುರ್ ರೆಹಮಾನ್ ಹಿನ್ನೆಲೆ

ಫಜ್ಲುರ್ ರೆಹಮಾನ್ ಅವರು ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರಕ್ಕೆ ಆಪ್ತರಾಗಿದ್ದಾರೆ. ಇದೇ ಕಾರಣಕ್ಕೆ ಅವರನ್ನು ರಾಷ್ಟ್ರೀಯ ಸ್ವತಂತ್ರ ತನಿಖಾ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. 2001 ರಲ್ಲಿ ಬಾಂಗ್ಲಾದೇಶ-ಭಾರತ ಗಡಿಯಲ್ಲಿ ನಡೆದ ಭೀಕರ ಘರ್ಷಣೆಯಲ್ಲಿ 16 ಬಿಎಸ್‌ಎಫ್ ಯೋಧರು ಹುತಾತ್ಮರಾದಾಗ ರೆಹಮಾನ್ ಅವರು ಬಿಡಿಆರ್‌ನ ಮುಖ್ಯಸ್ಥರಾಗಿದ್ದರು ಎಂಬುದು ಗಮನಾರ್ಹ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular