HomeNationalHorror News - ಯುವತಿಯ ಕಾಲಿಗೆ ಮೊಳೆಗಳನ್ನು ಹೊಡೆದು ಬರ್ಬರವಾಗಿ ಕೊಲೆ ಮಾಡಿದ ಪಾಪಿಗಳು, ಬೆಚ್ಚಿಬಿದ್ದ...

Horror News – ಯುವತಿಯ ಕಾಲಿಗೆ ಮೊಳೆಗಳನ್ನು ಹೊಡೆದು ಬರ್ಬರವಾಗಿ ಕೊಲೆ ಮಾಡಿದ ಪಾಪಿಗಳು, ಬೆಚ್ಚಿಬಿದ್ದ ಜನತೆ…!

Horror News -ಭಾರತದಲ್ಲಿ ಮಹಿಳೆಯರ ಮೇಲಿನ ಹಿಂಸಾಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇತ್ತೀಚೆಗೆ ಬಿಹಾರದ ನಳಂದಾ ಜಿಲ್ಲೆಯಲ್ಲಿ ನಡೆದ ಭೀಕರ ಘಟನೆಯೊಂದು ಇಡೀ ದೇಶವನ್ನು ಕಳವಳಗೊಳಿಸಿದೆ. ಅಪರಿಚಿತ ಯುವತಿಯೊಬ್ಬಳನ್ನು ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಬುಧವಾರ (ಮಾರ್ಚ್ 6) ಬೆಳಕಿಗೆ ಬಂದಿದೆ. ಯುವತಿಯ ಮೇಲೆ ನಡೆದಂತಹ ಹಿಂಸಾಚಾರಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿದೆ ಎನ್ನಲಾಗಿದೆ. ಇನ್ನೂ ಮಹಿಳೆಯ ಗುರುತು ಪತ್ತೆಯಾಗಿಲ್ಲ ಎನ್ನಲಾಗಿದೆ.

Horror - "Crime scene in Nalanda, Bihar, where a young woman was brutally murdered"

ಇನ್ನೂ ಈ ಘಟನೆ ನಳಂದಾ ಜಿಲ್ಲೆಯ ಚಾಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹರ್ನೌತ್ ಬ್ಲಾಕ್, ಸಾರ್ಥ ಪಂಚಾಯತ್ ವ್ಯಾಪ್ತಿಯ ಬಹದ್ದೂರ್ಪುರ ಗ್ರಾಮದಲ್ಲಿ ನಡೆದಿದೆ. ಸ್ಥಳೀಯರು ರಸ್ತೆ ಬದಿಯಲ್ಲಿ ಯುವತಿಯ ಮೃತದೇಹ ಕಂಡು ಪೊಲೀಸರ ಗಮನಕ್ಕೆ ತಂದಾಗ ಪ್ರಕರಣ ಬಹಿರಂಗವಾಗಿದೆ.ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಚಾಂಡಿ ಪೊಲೀಸ್‌ ಠಾಣೆಯ ಸಿಬ್ಬಂದಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಿಹಾರ್ ಶರೀಫ್ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ತಿಳಿದುಬಂದಿದೆ.

Horror News -ಯುವತಿಯ ಗುರುತು ಪತ್ತೆಯಾಗಿಲ್ಲ; ಪೊಲೀಸರ ತನಿಖೆ ತೀವ್ರ

ಮೃತದೇಹದ ಗುರುತು ಇನ್ನೂ ಪತ್ತೆಯಾಗಿಲ್ಲ. ಮಾಹಿತಿ ಪಡೆದ ತಕ್ಷಣ ಚಾಂಡಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಬಿಹಾರ್ ಶರೀಫ್ ಆಸ್ಪತ್ರೆಗೆ ರವಾನಿಸಿದ್ದಾರೆ. “ಮೃತದೇಹ ಇಲ್ಲಿ ಹೇಗೆ ತಲುಪಿತು? ಯಾರು ಈ ಯುವತಿ? ಯಾಕಾಗಿ ಈ ಕ್ರೂರ ಹತ್ಯೆ ನಡೆದಿದೆ?” ಎಂಬ ಪ್ರಶ್ನೆಗಳ ಉತ್ತರಕ್ಕಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇನ್ನೂ ಪೊಲೀಸ್ ಅಧಿಕಾರಿ ಸುಮನ್ ಕುಮಾರ್‍ ಮಾಹಿತಿ ನೀಡಿದ್ದು, ಮೃತಳ ಕಾಲಿಗೆ 10 ಮೊಳೆಗಳು ಚುಚ್ಚಿರುವುದು ಕಂಡು ಬಂದಿದೆ. ಸಾವಿಗೆ ಮುನ್ನಾ ಯುವತಿಯ ಮೇಲೆ ಅತ್ಯಾಚಾರವೆಸಗಿದ ಸಾಧ್ಯತೆಯೂ ಇರುತ್ತದೆ ಎಂದು ತಿಳಿಸಿದ್ದಾರೆ.

Horror - "Crime scene in Nalanda, Bihar, where a young woman was brutally murdered"

Horror News – ಯುವತಿ ಮಾಟ-ಮಂತ್ರಕ್ಕೆ ಬಲಿಯಾಗಿದ್ದಾಳಾ?

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮೃತ ಯುವತಿಯ ವಯಸ್ಸು 25 ರಿಂದ 30 ವರ್ಷದ ನಡುವೆಯಿರಬಹುದು. ಆಕೆಯ ಬಲಗೈಯಲ್ಲಿ ಸೂಜಿ ಚುಚ್ಚಿದ ಗುರುತು ಪತ್ತೆಯಾಗಿದೆ. ಯುವತಿಯ ಗುರುತು ಪತ್ತೆ ಮಾಡುವ ಸಲುವಾಗಿ ಈ ಮಾಹಿತಿಯನ್ನು ಸುತ್ತಮುತ್ತಲಿನ ಜಿಲ್ಲೆಗಳ ಪೊಲೀಸರಿಗೂ ಕಳುಹಿಸಲಾಗಿದೆ. ಇನ್ನೊಂದೆಡೆ, ಕೆಲವರು ಯುವತಿ ಮಾಟ-ಮಂತ್ರ ಅಥವಾ ಅಂಧವಿಶ್ವಾಸದ ಬಲಿಯಾಗಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಘಟನೆ ಇಡೀ ದೇಶದ ಜನತೆ ಬೆಚ್ಚಿ ಬೀಳಿಸುವಂತೆ ಮಾಡಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular