Monday, September 1, 2025
HomeNationalCrime News : ಗಂಡನ ಕಣ್ಣಿಗೆ ಖಾರದ ಪುಡಿ ಎರಚಿ, ಸೀರೆಯಿಂದ ಕತ್ತು ಬಿಗಿದು ಕೊಲೆ...

Crime News : ಗಂಡನ ಕಣ್ಣಿಗೆ ಖಾರದ ಪುಡಿ ಎರಚಿ, ಸೀರೆಯಿಂದ ಕತ್ತು ಬಿಗಿದು ಕೊಲೆ ಮಾಡಿದ ಹೆಂಡತಿ…!

Crime News – ಒಂದು ಕಾಲದಲ್ಲಿ ಪತಿಯ ದೀರ್ಘಾಯುಷ್ಯಕ್ಕಾಗಿ ಉಪವಾಸ, ಪೂಜೆಗಳನ್ನು ಮಾಡುತ್ತಿದ್ದ ಹೆಂಡತಿಯರು ಹೆಚ್ಚಾಗಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಪ್ರತಿದಿನ, ಹಲವಾರು ಕಾರಣಗಳಿಗಾಗಿ ಸ್ವಂತ ಹೆಂಡತಿಯರೇ ಪತಿಯರನ್ನು ಕೊಲ್ಲುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಕೆಲವು ಪ್ರೇಮ ಸಂಬಂಧಗಳು, ವಿವಾಹೇತರ ಸಂಬಂಧಗಳು, ಮತ್ತೆ ಕೆಲವು ಸಂಸಾರದಲ್ಲಿನ ಕಲಹ ಮತ್ತು ಕಿರುಕುಳದಿಂದಾಗಿ ಇಂತಹ ಅನಿರೀಕ್ಷಿತ ಘಟನೆಗಳು ನಡೆಯುತ್ತಿವೆ. ಅಂಥದ್ದೇ ಒಂದು ದಾರುಣ ಘಟನೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಲ್ಲಿ ನಡೆದಿದೆ.

Telangana crime news wife kills husband in Vikarabad domestic violence case

Crime News – ಘಟನೆ ವಿವರಗಳು

ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಮೊಮಿನ್‌ಪೇಟ್ ಮಂಡಲದ ಕೇಸಾರಂ ಗ್ರಾಮದಲ್ಲಿ ಕುಮಾರ್ ಮತ್ತು ರೇಣುಕಾ ಎಂಬ ದಂಪತಿ ವಾಸವಾಗಿದ್ದರು. ಕುಮಾರ್ ಕುಡಿತಕ್ಕೆ ದಾಸನಾಗಿದ್ದನು. ಪ್ರತಿದಿನ ಕುಡಿದು ಮನೆಗೆ ಬಂದು ರೇಣುಕಾಳಿಗೆ ಕಿರುಕುಳ ನೀಡುತ್ತಿದ್ದನು. ಈ ಕಿರುಕುಳವನ್ನು ಸಹಿಸಲು ಸಾಧ್ಯವಾಗದೇ ರೇಣುಕಾ, ಕುಮಾರ್‌‌ನನ್ನು ಕೊಲ್ಲಲು ನಿರ್ಧರಿಸಿದ್ದಳು. ಒಂದು ದಿನ ಕುಡಿದು ಮನೆಗೆ ಬಂದ ಕುಮಾರ್, ರೇಣುಕಾಳ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ರೇಣುಕಾ, ಕೋಪದಿಂದ ಕುಮಾರ್‌ನ ಕಣ್ಣುಗಳಿಗೆ ಖಾರದ ಪುಡಿ ಎರಚಿದ್ದಾಳೆ. ನಂತರ ಕುಮಾರ್‌ನ ಕತ್ತು ಬಿಗಿದು ಕೊಲೆ ಮಾಡಿದ್ದಾಳೆ. Read this also : ತೆಲಂಗಾಣದಲ್ಲಿ ವಿಚಿತ್ರ ಘಟನೆ: ಟಿವಿ ಸೀರಿಯಲ್‌ಗಾಗಿ ಗಂಡನೊಂದಿಗೆ ಜಗಳ, ವಿಷ ಸೇವಿಸಿದ ಹೆಂಡತಿ

Telangana crime news wife kills husband in Vikarabad domestic violence case

Crime News – ಪೊಲೀಸರ ಹೇಳಿಕೆ

ಘಟನೆಯ ಬಗ್ಗೆ ಮಾಹಿತಿ ತಿಳಿದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿ, ಕುಮಾರ್ ಮೃತದೇಹವನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಘಟನೆಯ ಕುರಿತು ಪೊಲೀಸರು ರೇಣುಕಾಳನ್ನು ಪ್ರಶ್ನಿಸಿದಾಗ, “ಕ್ಷಣಿಕ ಆವೇಶದಲ್ಲಿ ಈ ತಪ್ಪನ್ನು ಮಾಡಿದ್ದೇನೆ, ಬೇರೇನು ಮಾಡಬೇಕೆಂದು ನನಗೆ ತಿಳಿಯಲಿಲ್ಲ” ಎಂದು ಅಳಲು ತೋಡಿಕೊಂಡಿದ್ದಾಳೆ. ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಇನ್ಸ್‌ಪೆಕ್ಟರ್ ವೆಂಕಟ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular