Author: by Admin

Welcome to ISM Kannada News, if you want to contact us, then feel free to say anything about www.ismkannadanews.com

Amit Shah -ಸದ್ಯ ಲೋಕಸಭಾ ಚುನಾವಣೆ ದೇಶದಾದ್ಯಂತ ಭರದಿಂದ ಸಾಗುತ್ತಿದೆ. ದೇಶದ ಎಲ್ಲಾ ಭಾಗಗಳಲ್ಲಿ ಚುನಾವಣೆ ಮುಗಿದ ಬಳಿಕ ಜೂನ್ 4 ರಂದು ಆಡಳಿತರೂಢ ಎನ್.ಡಿ.ಎ ಒಕ್ಕೂಟ 12.30 ವೇಳೆಗೆ 400 ಸ್ಥಾನಗಳ ಗಡಿಯನ್ನು ದಾಟುತ್ತದೆ ಎಂದು ಗೃಹ ಸಚಿವ ಅಮಿತಾ ಭವಿಷ್ಯ ನುಡಿದಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಬಾರಿ 400 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಬಿಜೆಪಿಯು 2019 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಯಾವ ರೀತಿ ಸಾಧನೆ ಮಾಡಿದೆಯೋ ಅದೇ ರೀತಿಯಲ್ಲಿ ಈ ಬಾರಿ ಪುನಾರ್ವತನೆಯಾಗಲಿದೆ. ದೆಹಲಿ, ಕರ್ನಾಟಕ, ಮಹಾರಾಷ್ಟ್ರ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ, ಮಧ್ಯಪ್ರದೇಶದಲ್ಲಿ ಫಲಿತಾಂಶ ಪುನರಾವರ್ತನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನೂ ಪಶ್ಚಿ ಬಂಗಾಳದಲ್ಲಿ ಕನಿಷ್ಟ 30 ಸ್ಥಾನಗಳನ್ನು ಈ ಬಾರಿ ಬಿಜೆಪಿ ಗೆಲ್ಲಲಿದೆ. ದಕ್ಷಿಣದ ರಾಜ್ಯಗಳಾದ ತಮಿಳುನಾಡು, ಕರ್ನಾಟಕ, ಕೇರಳ ಹಾಗೂ ಆಂಧ್ರಪ್ರದೇಶದಲ್ಲಿ ಭಾರಿ ಸ್ಪರ್ಧೆ ಇರುತ್ತದೆ…

Read More

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಸದ್ಯ ರಾಜ್ಯ ಹಾಗೂ ರಾಷ್ಟ್ರದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಸದ್ಯ ಪ್ರಜ್ವಲ್ ರೇವಣ್ಣ ವಿದೇಶದಲ್ಲಿದ್ದಾರೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಪ್ರಜ್ವಲ್ ಯಾವುದೇ ದೇಶದಲ್ಲಿದ್ದರೂ ಎಸ್ಕೇಪ್ ಆಗಲು ಬಿಡೊಲ್ಲ, ಆತ ಎಲ್ಲಿದ್ದರೂ ಹಿಡಿದು ತರ್ತಿವಿ ಎಂದು ಗುಡುಗಿದ್ದಾರೆ. ಬಾಗಲಕೋಟೆಯಲ್ಲಿ ಮಾದ್ಯಮಗಳೋಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಜರ್ಮನಿಯಿಂದ ದುಬೈಗೆ ಪ್ರಯಾಣ ಬೆಳೆಸಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಗುಡುಗಿದ್ದಾರೆ. ಮಾದ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಪ್ರಜ್ವಲ್ ರೇವಣ್ಣ ಎಲ್ಲಿಗಾದರೂ ಎಸ್ಕೇಪ್ ಆಗಲಿ, ಯಾವುದೇ ದೇಶದಲ್ಲಿರಲಿ ಅಲ್ಲಿಂದ ಹಿಡಿದು ತರುತ್ತೇವೆ. ಕೇಂದ್ರ ಸರ್ಕಾರಕ್ಕೆ ಪಾಸ್ ಪೋರ್ಟ್ ರದ್ದು ಮಾಡುವ ಅಧಿಕಾರ ಇರೋದು, ಈಗಾಗಲೇ ನಾನು ಪ್ರಧಾನಿಗೆ ಪ್ರಜ್ವಲ್ ಪಾಸ್ ಪೋರ್ಟ್ ರದ್ದು ಮಾಡಿ ಅಂತಾ ಪತ್ರ ಕೂಡ ಬರೆದಿದ್ದೇನೆ. ಆದರೆ ಕೇಂದ್ರ ಸರ್ಕಾರ ಪ್ರಜ್ವಲ್ ನನ್ನು ರಕ್ಷಣೆ ಮಾಡುತ್ತಿದೆ. ಚುನಾವಣೆ ಸಮಯದಲ್ಲಿ ಪ್ರಜ್ವಲ್ ನನ್ನ ಮಗ ಇದ್ದ ಹಾಗೆ ಎಂದು ಹೇಳಿದ್ದರು. ಆದರೆ ಇದೀಗ ಅವರ ಕುಟುಂಬ…

Read More

ಹಿಂದಿನ ಕಾಲದಲ್ಲಿ ಜಮೀನುದಾರರು ಸಾಲ ಕೊಟ್ಟು, ಸಾಲ ಪಡೆದವರು ಸಾಲ ತೀರಿಸದೇ ಇದ್ದ ಪಕ್ಷದಲ್ಲಿ ಅವರ ಮನೆಯಲ್ಲಿದ್ದವರು ಜಮೀನುದಾರರ ಮನೆಯಲ್ಲಿ ಜೀತಕ್ಕೆ ಇಟ್ಟುಕೊಳ್ಳುತ್ತಿದ್ದಂತಹ ವಿಚಾರಗಳನ್ನು ತಿಳಿದಿರುತ್ತೇವೆ. ಹುಡುಗರು, ಹುಡುಗಿಯರು ಹೀಗೆ ಮಕ್ಕಳನ್ನು ಸಹ ಒತ್ತೆಯಾಳುಗಳಾಗಿ ಇಟ್ಟುಕೊಳ್ಳುತ್ತಿದ್ದರು. ಆದರೆ ಇಂದಿನ ಕಾಲದಲ್ಲೂ ಸಹ ಅಂತಹುದೇ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ. ಆದರೆ ಇಲ್ಲಿ ಖಾಸಗಿ ಬ್ಯಾಂಕ್ ಸಾಲ ಪಡೆದವನ ಹೆಂಡತಿಯನ್ನು ಒತ್ತೆಯಾಗಿ ಇರಿಸಿಕೊಂಡ ಘಟನೆ ನಡೆದಿದೆ. ಈಗಾಗಲೇ ಸಂಜೆ 6 ಗಂಟೆಯ ಬಳಿಕ ಸಾಲದ ಹಣ ಮರುಪಾವತಿ ಮಾಡುವಂತೆ ಹಣಕಾಸು ಸಂಸ್ಥೆಗಳು ಒತ್ತಾಯಿಸುವಂತಿಲ್ಲ ಎಂಬ ನಿಯಮಗಳಿವೆ. ಆದರೆ ತಮಿಳುನಾಡಿದ ಸೇಲಂ ಜಿಲ್ಲೆಯ ವಳಪ್ಪಾಡಿಯಲ್ಲಿರುವ IDFC ಬ್ಯಾಂಕ್ ನಲ್ಲಿ ಸಾಲ ಮಾಡಿದ್ದ ಪತಿ ಸಾಲದ ಕಂತನ್ನು ಕಟ್ಟಿಲ್ಲ ಎಂದು ಆತನ ಪತ್ನಿಯನ್ನು ಒತ್ತೆಯಾಗಿ ಇಟ್ಟುಕೊಂಡ ಆಘಾತಕಾರಿ ಘಟನೆ ನಡೆದಿದೆ. ಪ್ರಶಾಂತ್ ಎಂಬ ವ್ಯಕ್ತಿ 35 ಸಾವಿರ ವೈಯುಕ್ತಿಕ ಸಾಲ ಪಡೆದಿದ್ದರು. ಆತನ ಸಾಲ ಕಂತು ಕಟ್ಟು ಇನ್ನೂ 10 ವಾರಗಳ ಸಮಯವಿತ್ತು ಎನ್ನಲಾಗಿದೆ. ಆದರೆ ಏ.30…

Read More

ಇತ್ತೀಚಿಗೆ ಸೋಷಿಯಲ್ ಮಿಡಿಯಾದ ಪುಣ್ಯ ಎಂಬಂತೆ ವಿಶ್ವದ ಮೂಲೆ ಮೂಲೆಯಲ್ಲಿ ನಡೆಯುವಂತಹ ಕೆಲವೊಂದು ಘಟನೆಗಳು ಬೇಗ ತಿಳಿಯುತ್ತಿರುತ್ತದೆ. ಅದರಲ್ಲೂ ಕೆಲವು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿರುತ್ತದೆ. ಇದೀಗ ಪೆಟ್ರೋಲ್ ಬಂಕ್ ನಲ್ಲಿ ಯುವತಿ ತನ್ನ ಧರಿಸಿದ ಪ್ಯಾಂಟ್ ಬಿಚ್ಚಿ ತನ್ನ ಖಾಸಗಿ ಅಂಗವನ್ನು ತೋರಿಸಲು ಮುಂದಾದ ವಿಚಿತ್ರ ಘಟನೆಯೊಂದು ನಡೆದಿದ್ದು, ಆ ಯುವತಿಯ ನಡೆಗೆ ಭಾರಿ ವಿರೋಧ ಸಹ ವ್ಯಕ್ತವಾಗಿದೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ ಎನ್ನಲಾಗಿದೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿರುವಂತೆ, ಪೆಟ್ರೋಲ್ ಬಂಕ್ ನಲ್ಲಿ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದ. ಈ ಸಮಯದಲ್ಲಿ ಇಬ್ಬರು ಯುವತಿಯರು ಸ್ಕೂಟರ್‍ ನಲ್ಲಿ ಆಗಮಿಸಿದ್ದಾರೆ. ಪೆಟ್ರೋಲ್ ಪಂಪ್ ಬಳಿ ಬಂದು ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ. ಪೆಟ್ರೋಲ್ ಹಾಕಿಸಿಕೊಂಡ ಬಳಿಕ ಯುವತಿ ಅಲ್ಲಿನ ಸಿಬ್ಬಂದಿಯ ಜೊತೆ ಮಾತನಾಡಿದ್ದಾಳೆ. ಬಳಿಕ ಮತ್ತೋರ್ವ ಯುವತಿ ಸ್ಕೂಟರ್‍ ನಿಂದ ವೇಗವಾಗಿ ಇಳಿದು ಸಿಬ್ಬಂದಿಯ ಎದುರಿಗೆ ತನ್ನ ಪ್ಯಾಂಟ್ ಬಿಚ್ಚಿದ್ದಾಳೆ. ತನ್ನ ಖಾಸಗಿ ಅಂಗ ತೋರಿಸಿದ್ದಾಳೆ. ಸಿಬ್ಬಂದಿ…

Read More

ಡ್ರೈ ಐಸ್ ತಿಂದ ಮೂರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಛತ್ತೀಸ್ ಗಢದ ರಾಜನಂದಗಾಂವ್ ಜಿಲ್ಲೆಯಲ್ಲಿ ನಡೆದಿದೆ. ಆಕಸ್ಮಿಕವಾಗಿ ಡ್ರೈ ಐಸ್ ತಿಂಬ ಬಾಲಕ ಮೃತಪಟ್ಟಿದ್ದಾನೆ. ರಾಜೇಂದಾಂಗ್ ಪ್ರದೇಶದಲ್ಲಿ ಕುಶಾಂತ್ ಸಾಹು ಎಂಬ ವ್ಯಕ್ತ ತಮ್ಮ ಮೂರು ವರ್ಷದ ಮಗು ಹಾಗೂ ಕುಟುಂಬದೊಂದಿಗೆ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಕುಶಾಂತ್ ಸಾಹು ಎಂಬಾತನ ತನ್ನ ಕುಟುಂಬದೊಂದಿಗೆ ರಾಜೆಂದಾಂಗ್ ವ್ಯಾಪ್ತಿಯಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ಮದುವೆ ಸಮಾರಂಭದಲ್ಲಿ ಈವೆಂಟ್ ಮ್ಯಾನೇಜ್ ಮೆಂಟ್ ನವರು ಸ್ಪೆಷಲ್ ಎಫೆಕ್ಟ್ ಗಾಗಿ ಅಲ್ಲಲ್ಲಿ ಡ್ರೈ ಐಸ್ ಇಟ್ಟಿದ್ದರು. ಆದರೆ ಮೂರು ವರ್ಷದ ಪುಟಾಣಿ ಮಗು ಅದನ್ನು ಐಸ್ ಕ್ರೀಂ ಎಂದು ಭಾವಿಸಿ ತಿಂದಿದ್ದಾನೆ. ಡ್ರೈ ಐಸ್ ತಿಂದ ಬಾಲಕ ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಕುಟುಂಬಸ್ಥರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತೀಚಿಗೆ ಗುರುಗ್ರಾಮ್ ನ ಕೆಫೆಯೊಂದರಲ್ಲೂ ಇದೇ ರೀತಿಯ…

Read More

ಬಹುಬೇಡಿಕೆ ನಟಿಯಾಗಿದ್ದ ಸದಾ ತೆಲುಗಿನ ಖ್ಯಾತ ನಿರ್ದೇಶಕ ತೇಜ ನಿರ್ದೇಶನದಲ್ಲಿ ಮೂಡಿಬಂದ ಜಯಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಕಳೆದ 2002 ರಲ್ಲಿ ತೆರೆಕಂಡ ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಸಕ್ಸಸ್ ಕಂಡಿತ್ತು. ಬಳಿಕ ಅನೇಕ ಸಿನೆಮಾಗಳಲ್ಲಿ ನಟಿಸಿದಂತಹ ಸದಾ ಇದೀಗ ಕಿರುತೆರೆಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಸದ್ಯ ಸದಾ ಮದುವೆಯ ಬಗ್ಗೆ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದು ಸತ್ಯಾ ಅಥವಾ ಸುಳ್ಳಾ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಆದರೆ ರೂಮರ್‍ ಮಾತ್ರ ಭಾರಿ ವೈರಲ್ ಆಗುತ್ತಿದೆ. ಸಿನಿರಂಗದ ಅನೇಕ ನಟಿಯರು 35 ವರ್ಷ ವಯಸ್ಸು ಆಗುತ್ತಿದ್ದಂತೆ ಮದುವೆಯಾಗಿ ಸೆಟಲ್ ಆಗುತ್ತಿದ್ದಾರೆ. ಕೆಲವು ನಟಿಯರು ಮದುವೆಯಾದ ಬಳಿಕ ಸಿನೆಮಾಗಳಿಂದ ದೂರವಾಗುತ್ತಿದ್ದಾರೆ. ಮತ್ತೆ ಕೆಲವರು ಸಿನೆಮಾಗಳಲ್ಲಿ ಮುಂದುವರೆಯುತ್ತಿರುತ್ತಾರೆ. ಆದರೆ ನಟಿ ಸದಾ ಮಾತ್ರ 40 ವರ್ಷ ದಾಟಿದರೂ ಸಹ ಮದುವೆಯಾಗಿಲ್ಲ.…

Read More

ಸದ್ಯ ಭಾರತ ದೇಶದಾದ್ಯಂತ ಬಿಸಿಲಿನ ತಾಪಕ್ಕೆ ಜನರು ತತ್ತರಿಸಿ ಹೋಗುತ್ತಿದ್ದಾರೆ. ಕೆಲವೊಂದು ಕಡೆ ಬಿಸಿಲಿನ ತಾಪ ತಾಳಲಾರದೆ ಮೃತಪಟ್ಟ ಘಟನೆಗಳು ಸಹ ನಡೆದಿದೆ. ಬೆಳಗ್ಗೆ 9 ರಿಂದಲೇ ಬಿಸಿಲಿನ ಕಾಟ ಶುರುವಾಗುತ್ತಿದೆ. ಫ್ಯಾನ್ ಗಳು, ಕೂಲರ್‍ ಗಳೂ ಸಹ ಈ ಬಿಸಿಲಿನ ಸಖೆಯಿಂದ ಪಾರು ಮಾಡಲು ಆಗುತ್ತಿಲ್ಲ ಎಂದೇ ಹೇಳಬಹುದು. ಬಿಸಿಲಿನ ಕಾರಣದಿಂದ ಜನರು ಹೊರಗೆ ಬರಲಾಗದೇ, ಮನೆಯಲ್ಲಿ ಇರಲಾಗದೆ ಪರಿತಪಿಸುತ್ತಿದ್ದಾರೆ. ಇದೀಗ ಪಾಂಡಿಚೆರಿಯಲ್ಲಿ ವಾಹನ ಸವಾರರಿಗಾಗಿ ಹೊಸ ಐಡಿಯಾ ಮಾಡಿದ್ದು, ಅಧಿಕಾರಿಗಳು ಮಾಡಿದ ಈ ಪ್ಲಾನ್ ಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ಅಧಿಕಾರಿಗಳು ಮಾಡಿದ ಪ್ಲಾನ್ ಆದರೂ ಏನು ಎಂಬ ವಿಚಾರಕ್ಕೆ ಬಂದರೇ, ನಗರ ಪ್ರದೇಶಗಳಲ್ಲಿ ಜನಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಜನಸಂಖ್ಯೆಗೆ ಅನುಗುಣವಾಗಿ ವಾಹನಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಪ್ರತಿ ಮನೆಯಲ್ಲೂ 2-3 ದ್ವಿಚಕ್ರ ವಾಹನಗಳಿರುತ್ತವೆ. ಯಾವುದೇ ರಸ್ತೆ ನೋಡಿದರೂ ವಾಹನಗಳಿಂದ ತುಂಬಿ ತುಳುಕುತ್ತಿವೆ. ಇದರಿಂದ ನಿತ್ಯ ನಗರಗಳಲ್ಲಿ ಸಂಚಾರ ದಟ್ಟಣೆ ತಪ್ಪುತ್ತಿಲ್ಲ. ಜೊತೆಗೆ ಸಿಗ್ನಲ್ ಬಿದ್ದರೇ…

Read More

ತಾವು ಒಬ್ಬರನ್ನೊಬ್ಬರು ಪ್ರೀತಿಸಿಕೊಂಡು, ಮನೆಯಲ್ಲಿ ಅವರ ಪ್ರೀತಿಯನ್ನು ಒಪ್ಪದ ಕಾರಣ ಯುವಕ ಯುವತಿಯನ್ನು ಕರೆದುಕೊಂಡು ಹೋಗಿದ್ದಾನೆ. ಈ ಕಾರಣದಿಂದ ಸಿಟ್ಟಿಗೆದ್ದ ಯುವತಿಯ ಕಡೆಯವರು ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿದ ಘಟನೆಯೊಂದು ಹಾವೇರಿ ಜಿಲ್ಲೆಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಮಕ್ಕಳು ಮಾಡುವ ತಪ್ಪಿಗೆ ಕೆಲವೊಮ್ಮೆ ಹೆತ್ತವರು ಶಿಕ್ಷೆ ಅನುಭವಿಸುವಂತಹ ಘಟನೆಗಳ ಬಗ್ಗೆ ಕೇಳಿದ್ದೇವೆ. ಇತ್ತೀಚಿಗೆ ಪ್ರೀತಿಸಿ ಓಡಿಹೋದ ಮಕ್ಕಳ ಕಾರಣದಿಂದ ಅವರ ಪೋಷಕರು ಶಿಕ್ಷೆ ಅನುಭವಿಸಿದಂತಹ ಘಟನೆಗಳು ಕರ್ನಾಟಕದಲ್ಲಿ ನಡೆದಿದೆ. ಅಂತಹುದೇ ಘಟನೆಯೊಂದು ಇದೀಗ ಹಾವೇರಿಯಲ್ಲಿ ನಡೆದಿದೆ. ಯುವಕನೋರ್ವ ಯುವತಿಯೊಬ್ಬಳನ್ನು ಪ್ರೀತಿಸಿ ಕರೆದುಕೊಂಡು ಹೋಗಿದ್ದಾನೆ. ಈ ಕಾರಣದಿಂದ ಸಿಟ್ಟಿಗೆದ್ದ ಯುವತಿಯ ಪೋಷಕರು ಯುವಕನ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿದ್ದಾರೆ. ಆಕೆಗೆ ಅಮಾನವೀಯವಾಗಿ ಥಳಿಸಿದ್ದಾರೆ. ಮನಬಂದಂತೆ ಥಳಿಸಿ ಕ್ರೌರ್ಯ ಮೆರೆದಿದ್ದಾರೆ. ಈ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ. ಅಂದಹಾಗೆ ಈ ಘಟನೆ 4 ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ…

Read More

ಗುಡಿಬಂಡೆ: ತಾಲೂಕಿನ ಸೋಮೇನಹಳ್ಳಿ ಹೋಬಳಿಯ ಜಂಬಿಗೇಮರದಹಳ್ಳಿ ಗ್ರಾಮದ ಬಳಿಯಿರುವ ಸರ್ಕಾರದ ಗೋಮಾಳ ಜಮೀನನ್ನು ಕೆಲ ಭೂಗಳ್ಳರು ಕಬಳಿಸಲು ಪ್ರಯತ್ನಿಸುತ್ತಿದ್ದು, ಈ ಬಗ್ಗೆ ತಾಲೂಕು ಆಡಳಿತ ಕ್ರಮ ವಹಿಸದೇ ಇದ್ದರೇ ಮುಂದಿನ ದಿನಗಳಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ರಾಜ್ಯ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತ ವೇದಿಕೆಯ ವತಿಯಿಂದ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು. ತಾಲೂಕಿನ ಸೋಮೇನಹಳ್ಳಿ ಹೋಬಳಿ ವ್ಯಾಪ್ತಿಯ ಜಂಬಿಗೇಮರದಹಳ್ಳಿ ಗ್ರಾಮದ ಸ.ನಂ. 130ರಲ್ಲಿ ಸುಮಾರು 98 ಎಕರೆ 37 ಗುಂಟೆ ಜಮೀನಿನ ಪೈಕಿ ಮಂಜೂರಾಗಿರುವ ಜಮೀನು ಬಿಟ್ಟು ಉಳಿದ ಜಮೀನಿನಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಜಾನುವಾರುಗಳನ್ನು ಮೇಯಿಸಿಕೊಳ್ಳಲು ಬಳಸುತ್ತಿದ್ದಾರೆ. ಗ್ರಾಮದಲ್ಲಿ ಸುಮಾರು 150ಕ್ಕೂ ಮೇಲ್ಪಟ್ಟು ಮನೆಗಳಿದ್ದು, ಈ ಪೈಕಿ ಬಹುತೇಕರು ಜಾನುವಾರುಗಳನ್ನು ಮೇಯಿಸಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದಾರೆ. ಗ್ರಾಮಸ್ಥರಿಗೆ ಬೇರೆ ಎಲ್ಲಿಯೂ ತಮ್ಮ ಜಾನುವಾರುಗಳನ್ನು ಮೇಯಿಸಲು ಜಾಗವಿರುವುದಿಲ್ಲ. ಆದ್ದರಿಂದ ಇದೇ ಗೋಮಾಳ ಜಮೀನನ್ನು ನಂಬಿಕೊಂಡಿದ್ದಾರೆ. ಆದರೆ ಕೆಲವು ಭೂಗಳ್ಳರು, ಪಟ್ಟಭದ್ರ ಹಿತಾಸಕ್ತಿಗಳು ಗಣಿಗಾರಿಕೆಯ ಮೂಲಕ ಜಮೀನನ್ನು ಕಬಳಿಸಲು ಹುನ್ನಾರ ಹೂಡಿದೆ ಎಂಬ…

Read More

ತಮ್ಮ 7 ವರ್ಷದ ಮಗುವಿಗೆ ಸಾಕು ನಾಯಿ ಕಚ್ಚಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ವ್ಯಕ್ತಿಯೋರ್ವ ಆ ನಾಯಿಯನ್ನು ಕೊಂದು ತಿಂದ ವಿಚಿತ್ರ ಘಟನೆಯೊಂದು ನಡೆದಿದೆ. ಈ ವಿಚಿತ್ರ ಘಟನೆ ಥಾಯ್ ಲ್ಯಾಂಡ್ ನಲ್ಲಿ ನಡೆದಿದ್ದು, ಆರೋಪಿಯನ್ನು ಸಾಂಗ್ ವುಟ್ ಚುಥಾಂಗ್ (42) ವರ್ಷ ಎಂದು ಗುರ್ತಿಸಲಾಗಿದೆ. ಈ ಘಟನೆಯ ಸಂಪೂರ್ಣ ದೃಶ್ಯ ಸಹ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಥಾಯ್ ಲ್ಯಾಂಡ್ ನ ಚಿಯಾಂಗ್ ಮಾಯ್ ನಲ್ಲಿ ನಾಯಿಯನ್ನು ಕೊಂದು ತಿಂದ ವಿಚಿತ್ರ ಘಟನೆಯೊಂದು ನಡೆದಿದೆ. ಸಾಂಗ್ ವುಟ್ ಚುಥಾಂಗ್ ಎಂಬ ವ್ಯಕ್ತಿ ತಮ್ಮ 7 ವರ್ಷದ ಸೋದರಳಿಯನನ್ನು ತಮ್ಮ ಸಾಕು ನಾಯಿ ಕಚ್ಚಿದೆ ಎಂಬ ಕಾರಣದಿಂದ ಕೋಪಗೊಂಡು ನಾಯಿಯನ್ನು ಕೊಂದಿದ್ದಾನೆ. ಇದು ಸಾಲದು ಎಂಬಂತೆ ಆ ನಾಯಿಯನ್ನು ತಿಂದಿದ್ದಾನೆ. ತಮ್ಮ 10 ವರ್ಷ ಸಾಕು ನಾಯಿಯ ಕುತ್ತಿಗೆಗೆ ಹಗ್ಗ ಕಟ್ಟಿ ಎಳೆದುಕೊಂಡು ಹೋಗಿದ್ದಾನೆ. ಅಲ್ಲಿನ ಮರಕ್ಕೆ ನೇತು ಹಾಕಿದ್ದಾನೆ. ನಾಯಿ ನರಳಿ ನರಳಿ ಸಾಯುವಂತೆ ಮಾಡಿದ್ದಾನೆ. ಬಳಿಕ ಸತ್ತ ನಾಯಿಯನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಹೋಗುತ್ತಾನೆ.…

Read More